ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆ
ಭಾರತ ಶಿಲ್ಪಕಲೆಗಳ ತವರೂರು. ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆ ದೇವಾಲಯಗಳ ತೊಟ್ಟಿಲು ಎಂದೇ ಕರೆಸಿಕೊಂಡಿದೆ. ಇಲ್ಲಿನ ಉಡುಪಿ ಜಿಲ್ಲೆಯ ಕೋಟೇಶ್ವರ ಮುಖ್ಯ ರಸ್ತೆಗೆ ಹೊಂದಿಕೊಂಡು ೧೯೬೦ ರಲ್ಲಿ ಶ್ರೀ ವಿಶ್ವಕರ್ಮಕರಕುಶಲ ಶಿಲ್ಪಕಲಾ ಶಾಲೆ ಎನ್ನುವ ಕಾರ್ಯಾಗಾರ ನಿರ್ಮಿಸಿಕೊಂಡು ರಥಗಳನ್ನು ಹಾಗು ಶಿಲ್ಪಕಲೆಗೆ ಸಂಬಂಧಪಟ್ಟ ಕೆಲಸಗಳನ್ನು ಇಲ್ಲಿಯೇ ತಯಾರಿಸಲಾಗುತ್ತದೆ. ಈ ಶಿಲ್ಪಕಲಾ ಶಾಲೆಯು ಈಗಿನ ಆಧುನಿಕತೆಗೆ ತಕ್ಕಂತೆ ಯಂತ್ರೋಪಕರಣಗಳನ್ನು ಹೊಂದಿದ್ದು ಯಾವುದೇ ರಥದ ಕೆಲಸವನ್ನು ನಿಭಾಯಿಸಲು ಸಾಮರ್ಥ್ಯ ಹೊಂದಿದೆ ಹಾಗೂ ಹತ್ತಾರು ಮಂದಿ ಶಿಲ್ಪಿಗಳಿಗೆ ಆಶ್ರಯ ತಾಣವಾಗಿದೆ. [ಇನ್ನೂ ಇದೆ . . .]
ರಥ ನಿರ್ಮಾಣ
ರಥ ನಿರ್ಮಾಣದ ಬಗ್ಗೆ ಹೆಚ್ಚು ಹೆಚ್ಚು ಅಧ್ಯಯನ ನೆಡೆಸಿ ಬೇರೆ ಬೇರೆ ದೇವಸ್ಥಾನಗಳ ರಥ ನಿರ್ಮಾಣದ ಬಗ್ಗೆ ತಿಳಿದುಕೊಂಡವರು. ರಥ ನಿರ್ಮಾಣಕ್ಕೆ ಅಗತ್ಯವಾದ ಪ್ರೇರಕವಾದ ಗ್ರಹ ವಾಸ್ತು ದರ್ಪಣ ಮುಂತಾದ. . .
ರಥಕ್ಕೆ ಸ್ಟೇರಿಂಗ್ ಅಳವಡಿಕೆ
ಈ ಹಿಂದೆ ರಥವನ್ನು ಎಳೆಯುವಾಗ ಸಂದರ್ಭಕ್ಕೆ ಸರಿಯಾಗಿ ತಿರುಗಿಸಲು ಚುಕ್ಕಾಣಿಯನ್ನು ಬಳಸುತಿದ್ದರು. ಇದು ತ್ರಾಸದಾಯಕವಾಗಿರುತಿತ್ತು. ಆದಕಾರಣ ರಥಗಳಿಗೆ ಸ್ಟೇರಿಂಗ್ ಅಳವಡಿಸಿ ರಥವನ್ನು ಬೇಕಾದಲ್ಲಿಗೆ . . .
ಹಳೆಯ ರಥದ ನವೀಕರಣ
ಐನೂರು ಆರುನೂರು ವರ್ಷದ ಹಿಂದಿನ ರಥದ ದುರಸ್ತಿ ಕಾರ್ಯವನ್ನು ಬಹಳ ಚಾಕಚಕ್ಯತೆಯಿಂದ ಮಾಡಲಾಗಿದೆ. ಇಂತಹ ಹಳೆಯ ರಥಗಳ ದುರಸ್ತಿ ಕಾರ್ಯದಲ್ಲಿ ಅಗತ್ಯವಿದ್ದಲ್ಲಿ ಸ್ಟೇರಿಂಗನ್ನು ಅಳವಡಿಸಲಾಗುವುದು.. .
ರಥದ ಬಗ್ಗೆ
-
ಪ್ರಾಚೀನ ಗ್ರಂಥದಲ್ಲಿ ನಿರೂಪಿಸಲಾದ ವೈವಿಧ್ಯಮಯ ರಥಗಳನ್ನು ಅಧ್ಯಯನದ ದ್ರಷ್ಟಿಯಿಂದ ಮೂರು ವಿಧವಾಗಿ ವರ್ಗಿಕರಿಸಿ ಹೇಳಬಹುದಾಗಿದೆ.
-
ದೇವಾಲಯದ ಉತ್ಸವಗಳಲ್ಲಿ ಬಳಸುವ ದೇಗುಲ ರಥಗಳು.
-
ದೇವತೆಗಳು, ಋಷಿಮುನಿಗಳು, ಬ್ರಾಹ್ಮಣರು, ಪಂಡಿತೋತ್ತಮರು, ಅಸುರರು, ಯಕ್ಷರು, ಕಿನ್ನರರು ಮುಂತಾದವರು ಬಳಸುತ್ತಿದ್ದ ವಿವಿಧ ಬಗೆಯ ರಥಗಳು.
-
ಕ್ಷತ್ರಿಯರು ಹಲವಾರು ಉದ್ದೇಶಗಿಳಿಗಾಗಿ ಬಳಸುತ್ತಿದ್ದ ರಥಗಳು. [ಇನ್ನೂ ಇದೆ . . .]